Kasargod: ಎಡನೀರು ಮಠದ ಶ್ರೀಗಳ ಕಾರಿಗೆ ಯುವಕರ ತಂಡದಿಂದ ದಾಳಿ

Kasargod: ಎಡನೀರು ಮಠದ ಶ್ರೀಗಳ ಕಾರಿಗೆ ಯುವಕರ ತಂಡದಿಂದ ದಾಳಿ




ಕಾಸರಗೋಡು: ಎಡನೀರು ಮಠದ ಶ್ರೀಗಳ ಕಾರಿಗೆ  ಯುವಕರ ತಂಡದಿಂದ ದಾಳಿ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕಾರ್ಯಕ್ರಮವೊಂದನ್ನು ಮುಗಿಸಿ ಮರಳಿ ಮಠಕ್ಕೆ ತೆರಳುತ್ತಿದ್ದರು. ಅವರ ಕಾರು ಕಾಸರಗೋಡಿನ ಬೋವಿಕಾನ‌ - ಇರಿಯಣ್ಣೆ ಮಾರ್ಗದ ನಡುವೆ ಸಂಚರಿಸುತ್ತಿದ್ದ ಸ್ವಾಮಿಗಳು ಕಾರಿನ‌ ಗಾಜಿಗೆ ದೊಣ್ಣೆಯಿಂದ ಕಿಡಿಗೇಡಿಗಳು ಬಡಿದಿದ್ದಾರೆ. ಈ ಘಟನೆಯನ್ನು ಖಂಡಿಸಿದ ಹಿಂದೂ ಪರ ಸಂಘಟನೆಗಳು ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಬೋವಿಕಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದಲ್ಲದೆ, ಸ್ವಾಮೀಜಿಯವರಿಗೆ ಹೆಚ್ಚಿನ ಭದ್ರತೆ ಒದಗಿಸಲು ಆಗ್ರಹ ಕೇಳಿ ಬರುತ್ತಿದೆ.

Ads on article

Advertise in articles 1

advertising articles 2

Advertise under the article